ಕಂಪ್ಲಿ ಸಾಮ್ರಾಜ್ಯವು ಡೆಕ್ಕನ್ ಪ್ರದೇಶದಲ್ಲಿ ೧೪ ನೇ ಶತಮಾನದ ಆರಂಭದಲ್ಲಿ ಒಂದು ಅಲ್ಪಾವಧಿಯ ಹಿಂದೂ ಸಾಮ್ರಾಜ್ಯವಾಗಿತ್ತು., ಭಾರತದ ಇಂದಿನ ಕರ್ನಾಟಕ ರಾಜ್ಯದ ಈಶಾನ್ಯ ಭಾಗಗಳಲ್ಲಿ ಬಳ್ಳಾರಿ ಮತ್ತು ತುಂಗಭದ್ರಾ ನದಿಯ ಬಳಿ ರಾಜ್ಯವು ಅಸ್ತಿತ್ವದಲ್ಲಿತ್ತು. ಇದು ದೆಹಲಿ ಸುಲ್ತಾನರ ಸೈನ್ಯಗಳ ಧಾಳಿಯಲ್ಲಿ ಉಂಟಾದ ಸೋಲಿನ ನಂತರ ಮತ್ತು ಇಸವಿ ೧೩೨೭/೨೮ ರಲ್ಲಿ ಒಂದು ನಿರ್ದಿಷ್ಟ ಸೋಲನ್ನು ಎದುರಿಸಿದಾಗ ಜೌಹರ್ (ಸಾಮೂಹಿಕ ಆತ್ಮಹತ್ಯೆ) ನಂತರ ಕೊನೆಗೊಂಡಿತು. ಕೆಲವು ಐತಿಹಾಸಿಕ ಖಾತೆಗಳಲ್ಲಿ ಕಂಪ್ಲಿ ಸಾಮ್ರಾಜ್ಯವನ್ನು ಬಸ್ನಾಗ ಸಾಮ್ರಾಜ್ಯ ಎಂದು ಕರೆಯಲಾಗುತ್ತದೆ ಮತ್ತು ಇದು ನಂತರ ಹಿಂದೂ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಲ ಕಾರಣವಾಯಿತು. == ಇತಿಹಾಸ == ಈ ಸಾಮ್ರಾಜ್ಯದ ಸ್ಥಾಪಕ ಹೊಯ್ಸಳ ಸೈನ್ಯದ ದಂಡನಾಯಕ ಸಿಂಗೇಯ ನಾಯಕ-೩ (ಕ್ರಿ.ಶ.೧೨೮೦-೧೩೦೦). ಇವನು ದೆಹಲಿ ಸುಲ್ತಾನರ ಮುಸ್ಲಿಂ ಪಡೆಗಳು ೧೨೯೪ನೇ ಇಸವಿಯಲ್ಲಿ ದೇವಗಿರಿಯ ಸೆಯುನಾ ಯಾದವರ ಪ್ರದೇಶಗಳನ್ನು ಸೋಲಿಸಿ ವಶಪಡಿಸಿಕೊಂಡ ನಂತರ ಸ್ವತಂತ್ರನಾದನು. ೧೩೦೦ರಲ್ಲಿ ಅವನ ಮಗ ಕಂಪಿಲಿದೇವನು ಉತ್ತರಾಧಿಕಾರಿಯಾದನು. ಅವನು ದೆಹಲಿ ಸುಲ್ತಾನರೊಂದಿಗೆ ರಾಜ್ಯದ ಗಡಿಕುರಿತು ವಿವಾದದಲ್ಲಿದ್ದನು. ಕಂಪಿಲಿ ಸಾಮ್ರಾಜ್ಯವು ಅಂತಿಮವಾಗಿ ೧೩೨೭/೨೮ರಲ್ಲಿ ದೆಹಲಿಯ ಸುಲ್ತಾನ ಮುಹಮ್ಮದ್ ಬಿನ್ ತುಘಲಕ್ ನ ಪಡೆಗಳಿಂದ ಉತ್ತರ ದಿಕ್ಕಿನಲ್ಲಾದ ಆಕ್ರಮಣಕ್ಕೆ ಕುಸಿಯಿತು. ಮಲಿಕ್ ಝಾನ ನೇತೃತ್ವದ ವಿಜಯಶಾಲಿ ತುಘಲಕ್ ನ ಸೈನ್ಯವು ಕಂಪಿಲಿ ಸಾಮ್ರಾಜ್ಯದ ಮೇಲಿನ ವಿಜಯದ ಸುದ್ದಿಯನ್ನು ಸತ್ತ ಹಿಂದೂ ರಾಜನ ಒಣಹುಲ್ಲಿನಿಂದ ತುಂಬಿದ ಕತ್ತರಿಸಿದ ತಲೆಯನ್ನು ದೆಹಲಿಯ ಮುಹಮ್ಮದ್ ಬಿನ್ ತುಘಲಕ್‌ಗೆ ಕಳುಹಿಸುವ ಮೂಲಕ ತಿಳಿಸಿತು. ಕಂಪಿಲಿ ಸಾಮ್ರಾಜ್ಯದ ಅವಶೇಷಗಳಿಂದ, ಇಸವಿ ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯವು ಉದಯಿಸಿತು ಮತ್ತು ೨೦೦ ವರ್ಷಗಳ ಕಾಲ ದಕ್ಷಿಣ ಭಾರತವನ್ನು ಆಳಿದ ಭಾರತದ ಪ್ರಸಿದ್ಧ ಸಾಮ್ರಾಜ್ಯಗಳಲ್ಲಿ ಒಂದಾಗಿ ಬೆಳೆಯಿತು. == ಇದನ್ನೂ ಸಹ ನೋಡಿ == ಕುಮಾರರಾಮ == ಉಲ್ಲೇಖ ==